ಮೊಳಕೆ

ಕತ್ತಲೆಯಲ್ಲಿ ಕತ್ತಲೆ ಆವರಿಸಿದ ರಾತ್ರಿ
ನಕ್ಷತ್ರಗಳು ನೆತ್ತಿಯ ಮೇಲೆ ಕುಣಿದಾಡುತ್ತಿವೆ

ವಾಸನೆ ಹೊತ್ತ ತಲೆದಿಂಬ ಅವರ ಸುಖನಿದ್ರೆ
ಆವರಿಸಿದೆ ಎಣ್ಣೆಯ ಕಮಟು ವಾಸನೆಯಲಿ.

ದೂರದಲ್ಲಿ ಎಲ್ಲೋ ನಾಯಿ ಬೆಚ್ಚಿ ಬೊಗಳಿದೆ
ಗೂರ್‍ಖಾನ ಸೀಟಿ ಅರೆಮಂಪರಿನಲಿ ಕೇಳಿಸಿದೆ.

ಪುಟ್ಟ ಚೈನು ಕಳಚಿದ ಸೈಕಲ್ಲಿನ ರಿಪೇರಿಯ
ಚಿಂತೆಯ ಕನಸುಗಳು ನಾಲ್ಕೂ ದಿಕ್ಕುಗಳ ಬಿಕ್ಕುಗಳು

ಜಾವದ ನರಳುವಿಕೆಯಲ್ಲಿ ಗಿಡದ ಹೂಗಳು
ಅರಳಿವೆ ಬೆಳಕಿಗೆ ತಮ್ಮ ಅರ್‍ಪಿಸಲು ಸಜ್ಜಾಗಿವೆ.

ಸುತ್ತಿದ ಚಾಪೆಯ ಸಂದಿಯಿಂದ ಇಲಿ ಹಾರಿ
ಬಚ್ಚಲಗೂಡು ಸೇರಿವೆ ಅವರಿವರ ಪಾದಗಳು

ಮಗು ಹೊಯ್ದ ಉಚ್ಚೆ ಜೋಳಿಗೆ ತೊಯ್ದಿದೆ
ಎದೆ ತುಂಬಿದ ಹಾಲು ಬಿಗಿದು ಅವಳು ಮುಲುಕಾಡಿದ್ದಾಳೆ

ರಾತ್ರಿಯ ಎಲ್ಲಾ ಕತ್ತಲೆ ಕನವರಿಕೆಗಳು ಮತ್ತೆ
ಹೊಸದಾಗಿ ಸೂರ್‍ಯನ ಕಿರಣದ ದಾರಿಯಲಿ
ಪಾದಗಳ ಊರುತ್ತ ನಡೆದಿವೆ

ಹೀಗೊಂದು ಕವಿತೆ ಕನ್ನಡಿ ಮುಂದೆ ನಿಂತು
ಅಲಂಕರಿಸಿಕೊಂಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುವ್ವಿ ಸುವ್ವ ಲಾಲೀ
Next post ನನ್ನ ಕವಿತೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys